ಜೀಕನ್ನಡ ವಾಹಿನಿ ಟಿವಿ ಪರದೆಯ ಮೇಲೆ ಮಿಂಚುವ ತಾರೆಗಳನ್ನು ಒಂದೆಡೆ ಸೇರಿಸಿತ್ತು. ಸದಾ ನವನವೀನ ಕಾರ್ಯಕ್ರಮಗಳನ್ನು ಕನ್ನಡಿಗರ ಮುಂದಿಡುತ್ತಾ, ಮನರಂಜನೆಯ ಪ್ಯಾಕೇಜ್ ಹೊತ್ತುತರುತ್ತಿರುವಎಲ್ಲಾ ಕಾರ್ಯಕ್ರಮಗಳ ಬಳಗಕ್ಕೆ ಪ್ರಶಸ್ತಿ ನೀಡಿ ವಂದಿಸಲು ಮುಂದಾಗಿತ್ತು. ವೀಕೆಂಡ್ ವಿಥ್ರಮೇಶ್, ಡ್ರಾಮಾಜ್ಯೂನಿಯರ್ಸ್, ಸರೆಗಮಪ ಲಿಟಲ್ಚಾಂಪ್ಸ್. ನಾಗಿಣಿ, ಗಂಗಾದಂತಹ ವಿಶಿಷ್ಟ ಯಶಸ್ವಿ ಕಾರ್ಯಕ್ರಮಗಳನ್ನು ಜನರ ಮುಂದಿಡುತ್ತಾ ವೀಕ್ಷಕರನ್ನು ಮನಸೂರೆಗೊಳಿಸುವ ವಾಹಿನಿ ತನ್ನಇಡೀ ಬಳಗವನ್ನು ಒಂದೆಡೆ ಕಲೆ ಹಾಕಿ ಜೀಕನ್ನಡಕುಟುಂಬಅವಾರ್ಡ್ಸ್ಕಾರ್ಯಕ್ರಮವನ್ನುಅತ್ಯಂತಅದ್ಧೂರಿಯಾಗಿ ನೆರವೇರಿಸಿತು. ಈ ಅದ್ಭುತಕಾರ್ಯಕ್ರಮಕ್ಕೆ ಸಾಕ್ಷಿಯಾದದ್ದು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣ.
ವೀಕ್ಷಕರ ಮನಗೆದ್ದಜೀಕನ್ನಡ ವಾಹಿನಿಯಎಲ್ಲಾ ತಾರೆಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದ್ದರೆ, ಆ ಸಂತಸದೊಟ್ಟಿಗೆಜೊತೆಯಾಗಲುಕನ್ನಡಚಿತ್ರರಂಗದತಾರಾ ಬಳಗವೇ ಆಗಮಿಸಿತ್ತು. ಚಾಲೆಂಜಿಂಗ್ ಸ್ಟಾರ್ದರ್ಶನ್, ನವರಸ ನಾಯಕಜಗ್ಗೇಶ್, ರಮೇಶ್ಅರವಿಂದ್, ರಚಿತಾರಾಮ್. ಗುರುಕಿರಣ್, ಮಾಲಾಶ್ರೀ, ಶೃತಿ ಹರಿಹರನ್, ಶರ್ಮಿಳಾ ಮಾಂಡ್ರೆ, ಹರ್ಷಿಕಾ ಪೂಣಚ್ಚ ಮುಂತಾದತಾರಾ ಮೆರುಗು ಈ ಸುಂದರಕಾರ್ಯಕ್ರಮದಲ್ಲಿತ್ತು. ಪ್ರಖ್ಯಾತ ನೃತ್ಯಪಟು ಪ್ರಭುದೇವನ್ತಂದೆ ಸುಂದರಮ್ ಮಾಸ್ಟರ್ ಈ ವಯಸ್ಸಿನಲ್ಲೂ ಅದ್ಭುತ ನೃತ್ಯ ಪ್ರದರ್ಶನ ನೀಡಿದರೆ, ಮಾಲಾಶ್ರೀ ಶೃತಿ ಹರಿಹರನ್, ಶರ್ಮಿಳಾ ಮಾಂಡ್ರೆ ಮತ್ತು ವಾಹಿನಿ ಎಲ್ಲಾತಾರಾ ಬಳಗ ಹೆಜ್ಜೆ ಹಾಕಿ ಇಡೀ ಸಭಿಕರನ್ನು ರಂಜಿಸಿತು.
ವೇದಿಕೆಯ ಮೇಲಿನಚಾಲೆಂಜಿಂಗ್ ಸ್ಟಾರ್ದರ್ಶನ್ ಮತ್ತುರಮೇಶ್ಅರವಿಂದರ ಮಾತುಕತೆಗೆಇಡೀ ಸಭಾಂಗಣವೇ ಮೆಚ್ಚುಗೆ ಸೂಚಿಸಿತು. ಕರ್ನಾಟಕದ ಸ್ಟಾರ್ ಪುಟಾಣಿಗಳಾದ ಡ್ರಾಮಾಜ್ಯುನಿಯರ್ಸ್ ಮಕ್ಕಳ ಜೊತೆಗೂಡಿ ವಿಜಯ್ರಾಘವೇಂದ್ರೆ ಮತ್ತು ಮಾಸ್ಟರ್ಆನಂದ್ ಲವಲವಿಕೆಯ ಸಮಾರಂಭದ ಸಾರಥ್ಯ ವಹಿಸಿದ್ದು ವಿಶೇಷ. ಸಮಾರಂಭದುದ್ದಕ್ಕೂ ವಾಹಿನಿ ವೀಕ್ಷಕರ ತಾರೆಗಳ ಮನ ಮಿಡಿವ ಮಾತುಗಳು ಮೂಡಿಬಂದದ್ದು ಸಮಾರಂಭದ ಸಂತಸ ಹೆಚ್ಚಿಸಿದ್ದು ಸುಳ್ಳಲ್ಲಾ. ದಶಕದ ಪಯಣವನ್ನು ನೆನೆಯುತ್ತಾ ಪ್ರಸ್ತುತ ವಾಸ್ತವತೆಯಗೆಲುವನ್ನು ಮೆಲುಕು ಹಾಕುತ್ತಾ, ಮುಂದಿನ ಹೆಜ್ಜೆಗಳೊಟ್ಟಿಗೆ ಮನರಂಜನೆಯರಸದೌತಣಕೊಡವ ಸೂಚನೆ ನೀಡಿತು ವಾಹಿನಿ.
ಸುಂದರ ಸಮಾರಂಭದಲ್ಲಿತೆರೆಯ ಮೇಲಿನ ಕಲಾವಿದರೊಟ್ಟಿಗೆತೆರೆಮರೆಯ ತಾರೆಗಳನ್ನೂ ವೇದಿಕೆ ಏರಿಸಿ ನಮಿಸಿದ್ದು ಈ ಕಾರ್ಯಕ್ರಮದ ವಿಶೇಷ. ರಂಗುರಂಗಿನ ಈ ಸಮಾರಂಭವನ್ನು ವೀಕ್ಷಿಸುವ ಸಂತಸವನ್ನು ವೀಕ್ಷಕರಿಗೆ ನೀಡುತ್ತಿರುವ ವಾಹಿನಿ ಇದೇ ಶನಿವಾರ ಮತ್ತು ಭಾನುವಾರ ಸಂಜೆ ೭ಕ್ಕೆ ಪ್ರಸಾರ ಮಾಡಲಿದೆ.